`ಯಕ್ಷ ಕುಸುಮ` ಗ್ರಂಥ ಬಿಡುಗಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಆಗಸ್ಟ್ 12 , 2013
|
ಮಂಗಳೂರು , ಆಗಸ್ಟ್ 12 , 2013
|
'ಯಕ್ಷ ಕುಸುಮ' ಗ್ರಂಥ ಬಿಡುಗಡೆ
ಮಂಗಳೂರು :
ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಹಾಗೂ ಸರಯೂ ಬಾಲ ಯಕ್ಷವೃಂದ ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ರವಿ ಅಲೆವೂರಾಯ ವರ್ಕಾಡಿ ಸಂಪಾದಿತ 10 ಯಕ್ಷಗಾನ ಪ್ರಸಂಗಗಳ 'ಯಕ್ಷಕುಸುಮ' ಗ್ರಂಥ ಬಿಡುಗಡೆ ಭಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿ, ಮಕ್ಕಳಿಗೆ ಯಕ್ಷಗಾನ ಕಲೆ ಮುಂದುವರಿಸುವುದು ಕಾರ್ಯಕ್ರಮಕ್ಕೆ ಕಾಯಕಲ್ಪ ನೀಡಿದಂತೆ. ಪಾರ್ತಿಸುಬ್ಬನ ನಂತರ ಯಕ್ಷಗಾನದಲ್ಲಿ ಬೇಕಾದಷ್ಟು ಪ್ರಸಂಗಗಳು ಹೊರಬಂದಿವೆ ಎಂದರು. ಇದೇ ವೇಳೆ ಉಭಯ ತಿಟ್ಟುಗಳ ಕಲಾವಿದ ಮಧೂರು ಉದಯ ನಾವಡರಿಗೆ ನಗದು ರು. 10 ಸಾವಿರ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.
|
|
|